ಬಂಟ್ವಾಳ, ಆಗಸ್ಟ್ 17, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಆಚರಣೆಯನ್ನು ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜ ಗೋಪಾಲ ಆಚಾರ್ಯ ನೇತೃತ್ವದಲ್ಲಿ ಇತರ ಅರ್ಚಕರೊಂದಿಗೆ ನಡೆಸಲಾಯಿತು.
ಕುಟುಂಬದವರು ಒಟ್ಟು ಸೇರಿ ನಾಗ ದೇವರಿಗೆ ಪೂಜೆ ಸಲ್ಲಿಸಿ ಹಾಲು, ಸೀಯಾಳ ವಿವಿಧ ಪೂಜಾ ಸಾಮಾಗ್ರಿಗಳನ್ನು ಸಮರ್ಪಿಸಿ ಹರಕೆ ಸಲ್ಲಿಸಿದರು. ಕುಟುಂಬದ ಯಾಜಮಾನ ಸದಾಶಿವ ಕೈಕಂಬ ಸಹಿತ ಕುಟುಂಬದವರು ನಾಗ ದೇವರ ಪ್ರಸಾದ ಸ್ವೀಕರಿಸಿದರು.












0 comments:
Post a Comment