ಶಾಲಾ ಬಸ್ ದುರಂತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಶಾಸಕ ರಾಜೇಶ್ ನಾಯಕ್ ಸಂತಾಪ : ಬೆಂಗಳೂರಿನಿಂದ ಊರಿಗೆ ತುರ್ತಾಗಿ ಹೊರಟ ಶಾಸಕರು - Karavali Times ಶಾಲಾ ಬಸ್ ದುರಂತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಶಾಸಕ ರಾಜೇಶ್ ನಾಯಕ್ ಸಂತಾಪ : ಬೆಂಗಳೂರಿನಿಂದ ಊರಿಗೆ ತುರ್ತಾಗಿ ಹೊರಟ ಶಾಸಕರು - Karavali Times

728x90

22 July 2026

ಶಾಲಾ ಬಸ್ ದುರಂತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಶಾಸಕ ರಾಜೇಶ್ ನಾಯಕ್ ಸಂತಾಪ : ಬೆಂಗಳೂರಿನಿಂದ ಊರಿಗೆ ತುರ್ತಾಗಿ ಹೊರಟ ಶಾಸಕರು

 ಬಂಟ್ವಾಳ, ಜುಲೈ 22, 2026 (ಕರಾವಳಿ ಟೈಮ್ಸ್) : ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ಪುಟಾಣಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯಲ್ಲಿ ಭಾಗವಹಿಸಲು ತೆರಳಿರುವ ಅವರು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಭೆಯ ನಡುವೆಯೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಗಾಯಾಳು ಮಕ್ಕಳಿಗೆ ಯಾವುದೇ ವಿಳಂಬವಿಲ್ಲದೆ ತುರ್ತು ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ. 

ಮೃತ ಬಾಲಕಿ ಚಿರಣ್ವಿಯ ಕುಟುಂಬಕ್ಕೆ ಅಗತ್ಯ ನೆರವು ಹಾಗೂ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿರುವ ಶಾಸಕರು ಸಭೆ ಮುಗಿದ ತಕ್ಷಣ ವಿಮಾನದ ಮೂಲಕ ತುರ್ತಾಗಿ ಮಂಗಳೂರಿಗೆ ತಲುಪಲಿದ್ದಾರೆ. ಬಳಿಕ ಮೃತ ವಿದ್ಯಾರ್ಥಿನಿಯ ಕುಟುಂಬ ಹಾಗೂ ಗಾಯಾಳು ವಿದ್ಯಾರ್ಥಿಗಳ ಕುಟುಂಬವನ್ನು ಭೇಟಿ ಮಾಡಲಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಶಾಲಾ ಬಸ್ ದುರಂತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಶಾಸಕ ರಾಜೇಶ್ ನಾಯಕ್ ಸಂತಾಪ : ಬೆಂಗಳೂರಿನಿಂದ ಊರಿಗೆ ತುರ್ತಾಗಿ ಹೊರಟ ಶಾಸಕರು Rating: 5 Reviewed By: karavali Times
Scroll to Top